ಐಶ್ವರ್ಯಂ ಸಂಪದಂ ಪ್ರಜ್ಞಾಂ ರಾಜ್ಯಂ ಚ ಸುಖಸಂಪದಃ । ದದಾತ್ಯುಪೋಷಿತಾ ಭಕ್ತ್ಯಾ ಜನೇಭ್ಯೋ ಹರಿಬೋಧಿನೀ
ಐಶ್ವರ್ಯ, ಸಂಪತ್ತು, ಜ್ಞಾನ, ರಾಜ್ಯ ಮತ್ತು ಸುಖಸಂಪತ್ತು — ಭಕ್ತಿಯಿಂದ ಆಚರಿಸಿದರೆ ಹರಿಬೋಧಿನಿ ಜನರಿಗೆ ಇದನ್ನೆಲ್ಲಾ ಕೊಡುತ್ತದೆ.
ಮೇರುಮನ್ದರಮಾತ್ರಾಣಿ ಪಾಪಾನ್ಯುಕ್ತಾನಿ ಯಾನಿ ಚ । ಏಕೇನೈವೋಪವಾಸೇನ ದಹತೇ ಪಾಪನಾಶಿನೀ
ಮೇರು ಮತ್ತು ಮಂದರ ಪರ್ವತದಷ್ಟು ದೊಡ್ಡ ಪಾಪಗಳಾದರೂ, ಪಾಪವನ್ನು ನಾಶಮಾಡುವ ಉಪವಾಸದಿಂದ ಒಂದೇ ಬಾರಿ ಸುಟ್ಟುಹೋಗುತ್ತವೆ.
ಪೂರ್ವಜನ್ಮಸಹಸ್ರೇಷು ಯತ್ಪಾಪಂ ಸಮುಪಾರ್ಜಿತಮ್ । ನಿಶಿ ಜಾಗರಣಂ ಚಾಸ್ಯಾ ದಹತೇ ತೂಲರಾಶಿವತ್
ಹಿಂದಿನ ಸಾವಿರ ಜನ್ಮಗಳಲ್ಲಿ ಮಾಡಿದ ಪಾಪಗಳೂ ಈ ದಿನ ರಾತ್ರಿ ಜಾಗರಣೆ ಮಾಡಿದರೆ, ಹತ್ತಿಯ ರಾಶಿಯಂತೆ ಸುಟ್ಟುಹೋಗುತ್ತವೆ.
ಉಪವಾಸಂ ಪ್ರಬೋಧಿನ್ಯಾಂ ಯಃ ಕರೋತಿ ಸ್ವಭಾವತಃ । ವಿಧಿವನ್ಮುನಿಶಾರ್ದೂಲ ಯಥೋಕ್ತಂ ಲಭತೇ ಫಲಮ್
ಯಾರು ಪ್ರಭೋದಿನಿಯಲ್ಲಿ ಸಹಜವಾಗಿ ಉಪವಾಸ ಮಾಡುತ್ತಾರೆ, ಮಹರ್ಷಿಗಳಲ್ಲಿ ಶ್ರೇಷ್ಠನೆ, ಅವರು ಶಾಸ್ತ್ರದಲ್ಲಿ ಹೇಳಿದಂತೆ ಫಲವನ್ನು ಪಡೆಯುತ್ತಾರೆ.
ಯಥೋಕ್ತಂ ಕುರುತೇ ಯಸ್ತು ವಿಧಿವತ್ಸುಕೃತಂ ನರಃ । ಸ್ವಲ್ಪಂ ಮುನಿವರಶ್ರೇಷ್ಠ ಮೇರುತುಲ್ಯಂ ಭವೇತ್ಫಲಮ್
ಯಾರು ಶಾಸ್ತ್ರದಂತೆ ಸತ್ಕರ್ಮಗಳನ್ನು ಮಾಡುತ್ತಾರೆ, ಮಹರ್ಷಿಗಳಲ್ಲಿ ಶ್ರೇಷ್ಠನೆ, ಅವರು ಸ್ವಲ್ಪ ಮಾಡಿದರೂ ಮೇರು ಪರ್ವತದಷ್ಟು ಫಲ ಸಿಗುತ್ತದೆ.
ವಿಧಿಹೀನಂ ತು ಯಃ ಕುರ್ಯಾತ್ಸುಕೃತಂ ಮೇರುಮಾತ್ರಕಮ್ । ಅಣುಮಾತ್ರಂ ತದಾಪ್ನೋತಿ ಫಲಂ ಧರ್ಮಸ್ಯ ನಾರದ
ಆದರೆ, ಶಾಸ್ತ್ರದ ನಿಯಮವಿಲ್ಲದೆ ಮೇರು ಪರ್ವತದಷ್ಟು ಸತ್ಕರ್ಮ ಮಾಡಿದರೂ, ನಾರದನೇ, ಧರ್ಮದ ಫಲ ಕಣದಷ್ಟು ಮಾತ್ರ ಸಿಗುತ್ತದೆ.
ಯೇ ಧ್ಯಾಯಂತಿ ಮನೋವೃತ್ಯಾ ಯೇ ಕರಿಷ್ಯಂತಿ ಬೋಧಿನೀಮ್ । ವಸಂತಿ ಪಿತರೋ ಹೃಷ್ಟಾ ವಿಷ್ಣುಲೋಕೇ ಚ ತಸ್ಯ ವೈ
ಯಾರು ಮನಸ್ಸಿನಿಂದ ಧ್ಯಾನ ಮಾಡುತ್ತಾರೆ, ಯಾರು ಬೋಧಿನಿಯನ್ನು ಆಚರಿಸುತ್ತಾರೆ, ಅವರ ಪಿತೃಗಳು ಸಂತೋಷದಿಂದ ವಿಷ್ಣುಲೋಕದಲ್ಲಿ ವಾಸಿಸುತ್ತಾರೆ.
ವಿಮುಕ್ತಾ ನಾರಕೈರ್ದುಃಖೈರ್ಯಾತಿ ವಿಷ್ಣೋಃ ಪರಂ ಪದಮ್ । ಕೃತ್ವಾ ತು ಪಾತಕಂ ಘೋರಂ ಬ್ರಹ್ಮಹತ್ಯಾದಿಕಂ ನರಃ
ನರಕದ ಎಲ್ಲಾ ದುಃಖಗಳಿಂದ ಮುಕ್ತನಾಗಿ, ಬ್ರಾಹ್ಮಣ ಹತ್ಯೆ ಸೇರಿದಂತೆ ಭಯಾನಕ ಪಾಪಗಳನ್ನು ಮಾಡಿದವನೂ ಕೂಡ ವಿಷ್ಣುವಿನ ಪರಮಸ್ಥಾನವನ್ನು ಪಡೆಯುತ್ತಾನೆ.
ಕೃತ್ವಾ ತು ಜಾಗರಂ ವಿಷ್ಣೋರ್ದ್ಧೌತಪಾಪೋ ಭವೇನ್ನರಃ । ದುಷ್ಪ್ರಾಪ್ಯಂ ಯತ್ಫಲಂ ವಿಪ್ರ ಅಶ್ವಮೇಧಾದಿಕೈರ್ಮಖೈಃ
ವಿಷ್ಣುವಿನ ಜಾಗರಣೆಯನ್ನು ಮಾಡಿದರೆ, ಆ ವ್ಯಕ್ತಿ ಪಾಪಗಳಿಂದ ಶುದ್ಧನಾಗುತ್ತಾನೆ; ಅಶ್ವಮೇಧ ಮುಂತಾದ ದೊಡ್ಡ ಯಜ್ಞಗಳಿಂದಲೂ ಸಿಗಲು ಕಷ್ಟವಾದ ಫಲವನ್ನು, ಪ್ರಬೋಧಿನಿ ಜಾಗರಣೆಯಿಂದ ಸುಲಭವಾಗಿ ಪಡೆಯಬಹುದು.
ಪ್ರಾಪ್ಯತೇ ತತ್ಸುಖೇನೈವ ಪ್ರಬೋಧಿನ್ಯಾಸ್ತು ಜಾಗರೇ । ಆಪ್ಲುತ್ಯ ಸರ್ವತೀರ್ಥೇಷು ಪ್ರದತ್ತ್ವಾ ಕಾಂಚನಂ ಮಹೀಮ್
ಎಲ್ಲಾ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ, ಬಂಗಾರ ಮತ್ತು ಭೂಮಿಯನ್ನು ದಾನ ಮಾಡಿದರೂ ಸಿಗುವ ಫಲವನ್ನು, ಪ್ರಬೋಧಿನಿ ಜಾಗರಣೆಯನ್ನು ಆನಂದದಿಂದ ಆಚರಿಸಿದರೆ ಅದೇ ಫಲ ಸಿಗುತ್ತದೆ.
ತತ್ಫಲಂ ಸಮವಾಪ್ನೋತಿ ಯತ್ಕೃತ್ವಾ ಜಾಗರಂ ಹರೇಃ । ಜಾತಃ ಸ ಏವ ಸುಕೃತೀ ಕುಲಂ ತೇನೈವ ಪಾವಿತಮ್
ಹರಿಯ ಜಾಗರಣೆಯಿಂದ ಸಿಗುವ ಫಲವು ಎಲ್ಲ ತೀರ್ಥಗಳಲ್ಲಿ ಸ್ನಾನಮಾಡಿ, ಮಹಾದಾನಗಳನ್ನು ಮಾಡಿದ ಫಲಕ್ಕೆ ಸಮಾನವಾಗಿದೆ; ಅಂಥವನು ಪುಣ್ಯಶಾಲಿಯಾಗುತ್ತಾನೆ ಮತ್ತು ಅವನ ಕುಲವೂ ಪವಿತ್ರವಾಗುತ್ತದೆ.
ಕಾರ್ತಿಕೇ ಮುನಿಶಾರ್ದೂಲ ಕೃತಾ ಯೇನ ಪ್ರಬೋಧಿನೀ । ಯಥಾ ಧ್ರುವಂ ನೃಣಾಂ ಮೃತ್ಯುರ್ಧನಂ ಗಾತ್ರಂ ತಥಾಧ್ರುವಮ್
ಮುನಿಶ್ರೇಷ್ಠನೇ, ಕಾರ್ತಿಕ ಮಾಸದಲ್ಲಿ ಯಾರು ಪ್ರಬೋಧಿನಿಯನ್ನು ಆಚರಿಸುತ್ತಾರೋ, ಮನುಷ್ಯರಿಗೆ ಮರಣವು ಖಚಿತವಾದಂತೆ, ಧನ ಮತ್ತು ದೇಹವೂ ಶಾಶ್ವತವಲ್ಲ.
ಇತಿ ಜ್ಞಾತ್ವಾ ಮುನಿಶ್ರೇಷ್ಠ ಕರ್ತವ್ಯಂ ವೈಷ್ಣವಂ ದಿನಮ್ । ಯಾನಿ ಕಾನಿ ಚ ತೀರ್ಥಾನಿ ತ್ರೈಲೋಕ್ಯೇ ಸಂಭವಂತಿ ಚ
ಇದನ್ನು ಅರಿತು, ಮುನಿಶ್ರೇಷ್ಠನೇ, ವೈಷ್ಣವ ದಿನವನ್ನು ಆಚರಿಸಬೇಕು; ಮೂರು ಲೋಕಗಳಲ್ಲಿರುವ ಎಲ್ಲ ಪವಿತ್ರ ತೀರ್ಥಗಳು—
ತಾನಿ ತಸ್ಯ ಗೃಹೇ ಸಮ್ಯಗ್ಯಃ ಕರೋತಿ ಪ್ರಬೋಧಿನೀಮ್ । ಕಿಂ ತಸ್ಯ ಬಹುಭಿಃ ಪುಣ್ಯೈಃ ಕೃತಾ ಯೇನ ಪ್ರಬೋಧಿನೀ
ಯಾರು ಪ್ರಬೋಧಿನಿಯನ್ನು ಸರಿಯಾಗಿ ಆಚರಿಸುತ್ತಾರೋ, ಅವರ ಮನೆಗೆ ಆ ಎಲ್ಲಾ ತೀರ್ಥಗಳು ಬಂದು ನೆಲಸುತ್ತವೆ; ಪ್ರಬೋಧಿನಿಯನ್ನು ಮಾಡಿದವನಿಗೆ ಇನ್ನಷ್ಟು ಪುಣ್ಯಗಳ ಅಗತ್ಯವೇನು?
ಪುತ್ರಪೌತ್ರಪ್ರದಾ ಹ್ಯೇಷಾ ಕಾರ್ತಿಕೇ ಹರಿಬೋಧಿನೀ । ಸ ಜ್ಞಾನೀ ಚ ಸ ಯೋಗೀ ಚ ಸ ತಪಸ್ವೀ ಜಿತೇಂದ್ರಿಯಃ
ಈ ಕಾರ್ತಿಕ ಮಾಸದ ಹರಿಬೋಧಿನಿ ಪುತ್ರ–ಪೌತ್ರರನ್ನು ಕೊಡುತ್ತದೆ; ಅವನು ಜ್ಞಾನಿಯೂ, ಯೋಗಿಯೂ, ಇಂದ್ರಿಯಗಳನ್ನು ಜಯಿಸಿದ ತಪಸ್ವಿಯೂ ಆಗಿರುತ್ತಾನೆ.
ಭೋಗೋ ಮೋಕ್ಷಶ್ಚ ತಸ್ಯಾಸ್ತಿ ಉಪಾಸ್ತೇ ಹರಿಬೋಧಿನೀಮ್ । ವಿಷ್ಣೋಃ ಪ್ರಿಯತರಾ ಹ್ಯೇಷಾ ಧರ್ಮಸಾರಸಹಾಯಿನೀ
ಹರಿಬೋಧಿನಿಯನ್ನು ಆರಾಧಿಸುವವನಿಗೆ ಭೋಗವೂ, ಮೋಕ್ಷವೂ ದೊರೆಯುತ್ತವೆ; ಈ ಹರಿಬೋಧಿನಿ ವಿಷ್ಣುವಿಗೆ ಅತ್ಯಂತ ಪ್ರಿಯ, ಧರ್ಮದ ಸಾರದ ಸಂಗಾತಿಯಾಗಿದ್ದಾಳೆ.
ಯಃ ಕರೋತಿ ನರೋ ಭಕ್ತ್ಯಾ ಭುಕ್ತಿಭಾಕ್ಸ ಭವೇನ್ನರಃ । ಪ್ರಬೋಧಿನೀಮುಪೋಷಿತ್ವಾ ಗರ್ಭೇ ನ ವಿಶತೇ ನರಃ
ಯಾರು ಭಕ್ತಿಯಿಂದ ಪ್ರಬೋಧಿನಿಯನ್ನು ಆಚರಿಸುತ್ತಾರೋ, ಅವರಿಗೆ ಭೋಗವೂ, ಮೋಕ್ಷವೂ ಸಿಗುತ್ತವೆ; ಪ್ರಬೋಧಿನಿಯನ್ನು ಆಚರಿಸಿದವನು ಮತ್ತೆ ಗರ್ಭವನ್ನು ಪ್ರವೇಶಿಸುವುದಿಲ್ಲ.
ಸರ್ವಧರ್ಮಾನ್ಪರಿತ್ಯಜ್ಯ ತಸ್ಮಾತ್ಕುರ್ವೀತ ನಾರದ । ಕರ್ಮಣಾ ಮನಸಾ ವಾಚಾ ಪಾಪಂ ಯತ್ಸಮುಪಾರ್ಜಿತಮ್
ಆದುದರಿಂದ, ನಾರದನೇ, ಎಲ್ಲ ಧರ್ಮಗಳನ್ನು ಬಿಟ್ಟು ಈ ವ್ರತವನ್ನು ಮಾಡಬೇಕು; ಕೈಯಿಂದ, ಮನಸ್ಸಿನಿಂದ, ಮಾತಿನಿಂದ ಮಾಡಿದ ಪಾಪಗಳು—
ತತ್ಕ್ಷಾಲಯತಿ ಗೋವಿಂದಃ ಪ್ರಬೋಧಿನ್ಯಾಂ ತು ಜಾಗರೇ । ಸ್ನಾನಂ ದಾನಂ ಜಪಃ ಪೂಜಾಂ ಸಮುದ್ದಿಶ್ಯ ಜನಾರ್ದನಮ್
ಆ ಪಾಪಗಳನ್ನು ಗೋವಿಂದನು ಪ್ರಬೋಧಿನಿ ಜಾಗರಣೆಯಲ್ಲಿ ತೊಳೆದುಹಾಕುತ್ತಾನೆ; ಜನಾರ್ದನನಿಗಾಗಿ ಮಾಡಿದ ಸ್ನಾನ, ದಾನ, ಜಪ, ಪೂಜೆ—
ನರೋ ಯತ್ಕುರುತೇ ವತ್ಸ ಪ್ರಬೋಧಿನ್ಯಾಂ ತದಕ್ಷಯಮ್ । ಯೇರ್ಚಯಂತಿ ನರಾಸ್ತಸ್ಯಾಂ ಭಕ್ತ್ಯಾ ದೇವಂ ಚ ಮಾಧವಮ್
ಯಾವುದೇ ಪುರುಷನು ಪ್ರಬೋಧಿನಿಯಲ್ಲಿ ಸ್ನಾನ, ದಾನ, ಜಪ, ಪೂಜೆ ಮಾಡಿದರೆ, ಅವೆಲ್ಲವೂ ಶಾಶ್ವತವಾಗುತ್ತವೆ; ಆ ದಿನ ಭಕ್ತಿಯಿಂದ ಮಾಧವನನ್ನು ಆರಾಧಿಸುವವರು—
ಸಮುಪೋಷ್ಯ ಪ್ರಮುಚ್ಯಂತೇ ಪಾಪೈಸ್ತೈಃ ಶತಜನ್ಮಜೈಃ । ಮಹಾವ್ರತಮಿದಂ ಪುತ್ರ ಮಹಾಪಾಪೌಘನಾಶನಮ್
ಉಪವಾಸವನ್ನು ಆಚರಿಸಿದ ಮೇಲೆ, ಅವರು ನೂರಾರು ಜನ್ಮಗಳಲ್ಲಿ ಸಂಚಿತವಾದ ಪಾಪಗಳಿಂದ ಮುಕ್ತರಾಗುತ್ತಾರೆ; ಇದು ಮಹಾವ್ರತ, ಮಗನೇ, ಮಹಾ ಪಾಪಗಳ ಗುಚ್ಚವನ್ನು ನಾಶಮಾಡುತ್ತದೆ.
ಪ್ರಬೋಧವಾಸರಂ ವಿಷ್ಣೋರ್ವಿಧಿವತ್ಸಮುಪೋಷಯೇತ್ । ವ್ರತೇನಾನೇನ ದೇವೇಶಂ ಪರಿತೋಷ್ಯ ಜನಾರ್ದನಮ್
ವಿಷ್ಣುವಿನ ಪ್ರಬೋಧ ದಿನವನ್ನು ವಿಧಿಯಂತೆ ಆಚರಿಸಬೇಕು; ಈ ವ್ರತದಿಂದ ದೇವೇಶನಾದ ಜನಾರ್ದನನು ಸಂತೋಷವಾಗುತ್ತಾನೆ.
ವಿರಾಜಯನ್ದಿಶಃ ಸರ್ವಾಃ ಪ್ರಯಾತಿ ಹರಿಮಂದಿರಮ್ । ಕರ್ತವ್ಯೈಷಾ ಪ್ರಯತ್ನೇನ ನರೈಃ ಕಾಂತಿಧನಾರ್ಥಿಭಿಃ
ಅವನು ಎಲ್ಲ ದಿಕ್ಕುಗಳನ್ನೂ ಪ್ರಕಾಶಮಾಡಿ, ಹರಿಯ ಮಂದಿರವನ್ನು ಸೇರುತ್ತಾನೆ; ಕೀರ್ತಿ ಮತ್ತು ಧನವನ್ನು ಬಯಸುವವರು ಈ ವ್ರತವನ್ನು ಶ್ರದ್ಧೆಯಿಂದ ಮಾಡಬೇಕು.
ಬಾಲ್ಯೇ ಯತ್ಸಂಚಿತಂ ಪಾಪಂ ಯೌವನೇ ವಾರ್ದ್ಧಕೇ ತಥಾ । ಶತಜನ್ಮಕೃತಂ ಪಾಪಂ ಸ್ವಲ್ಪಂ ವಾ ಯದಿ ವಾ ಬಹು
ಬಾಲ್ಯದಲ್ಲಿ, ಯೌವನದಲ್ಲಿ, ವೃದ್ಧಾಪ್ಯದಲ್ಲೂ ಸಂಚಯವಾದ ಪಾಪಗಳು, ನೂರು ಜನ್ಮಗಳಲ್ಲಿ ಮಾಡಿದ ಪಾಪಗಳು, ಸ್ವಲ್ಪವಾದರೂ ಅಥವಾ ಹೆಚ್ಚು ಆದರೂ,
ತತ್ಕ್ಷಾಲಯತಿ ಗೋವಿಂದಶ್ಚಾಸ್ಯಾಮಭ್ಯರ್ಚಿತೋ ನೃಣಾಮ್ । ಧನಧಾನ್ಯವಹಾ ಪುಣ್ಯಾ ಸರ್ವಪಾಪಹರಾ ಪರಾ
ಈಯಲ್ಲಿ ಗೋವಿಂದನನ್ನು ಭಕ್ತಿಯಿಂದ ಪೂಜಿಸಿದರೆ, ಅವನು ಜನರ ಪಾಪಗಳನ್ನು ತೊಳೆದುಹಾಕುತ್ತಾನೆ; ಇದು ಧನ, ಧಾನ್ಯವನ್ನು ಕೊಡುತ್ತದೆ, ಶುಭವನ್ನು ತರುತ್ತದೆ ಮತ್ತು ಎಲ್ಲ ಪಾಪಗಳನ್ನೂ ದೂರಮಾಡುತ್ತದೆ.
ತಾಮುಪೋಷ್ಯ ಹರೇರ್ಭಕ್ತ್ಯಾ ದುರ್ಲ್ಲಭಂ ನ ಭವೇತ್ಕ್ವಚಿತ್ । ಚಂದ್ರಸೂರ್ಯೋಪರಾಗೇ ಚ ಯತ್ಫಲಂ ಪರಿಕೀರ್ತಿತಮ್
ಹರಿಯ ಭಕ್ತಿಯಿಂದ ಇದನ್ನು ಆಚರಿಸಿದರೆ, ಯಾವುದೂ ಅಸಾಧ್ಯವಲ್ಲ; ಚಂದ್ರ ಅಥವಾ ಸೂರ್ಯ ಗ್ರಹಣದಲ್ಲಿ ದೊರಕುವ ಫಲವನ್ನು ಇಲ್ಲಿ ವಿವರಿಸಿದ್ದಾರೆ.
ತತ್ಸಹಸ್ರಗುಣಂ ಪ್ರೋಕ್ತಂ ಪ್ರಬೋಧಿನ್ಯಾಂ ಪ್ರಜಾಗರೇ । ಸ್ನಾನಂ ದಾನಂ ಜಪೋ ಹೋಮಃ ಸ್ವಾಧ್ಯಾಯೋಽಭ್ಯರ್ಚನಂ ಹರೇಃ
ಪ್ರಬೋಧಿನಿ ರಾತ್ರಿ ಮಾಡಿದ ಸ್ನಾನ, ದಾನ, ಜಪ, ಹೋಮ, ಪಠಣ, ಹರಿಯ ಆರಾಧನೆಗಳು ಸಾವಿರಪಟ್ಟು ಹೆಚ್ಚಿನ ಫಲವನ್ನು ಕೊಡುತ್ತವೆ ಎಂದು ಹೇಳಲಾಗಿದೆ.
ತತ್ಸರ್ವಂ ಕೋಟಿಗುಣಿತಂ ಪ್ರಬೋಧಿನ್ಯಾಂ ಕೃತಂ ತು ಯತ್ । ಜನ್ಮಪ್ರಭೃತಿಯತ್ಪುಣ್ಯಂ ನರೇಣೋಪಾರ್ಜಿತಂ ಭವೇತ್
ಪ್ರಬೋಧಿನಿಯಲ್ಲಿ ಮಾಡಿದ ಎಲ್ಲ ಕಾರ್ಯಗಳು ಕೋಟಿಗುಣ ಹೆಚ್ಚಾಗಿ ಫಲ ಕೊಡುತ್ತವೆ; ಜನ್ಮದಿಂದ ಸಂಪಾದಿಸಿದ ಪುಣ್ಯವೂ ಅದಕ್ಕಿಂತ ಕಡಿಮೆಯಲ್ಲ.
ವೃಥಾ ಭವತಿ ತತ್ಸರ್ವಮಕೃತ್ವಾ ಕಾರ್ತಿಕೇ ವ್ರತಮ್ । ಅಕೃತ್ವಾ ನಿಯಮಂ ವಿಷ್ಣೋಃ ಕಾರ್ತಿಕಂ ಯಃ ಕ್ಷಿಪೇನ್ನರಃ
ಕಾರ್ಥಿಕ ಮಾಸದಲ್ಲಿ ವ್ರತವನ್ನು ಆಚರಿಸದೆ ಇದ್ದರೆ, ಆ ಎಲ್ಲ ಪುಣ್ಯಗಳು ವ್ಯರ್ಥವಾಗುತ್ತವೆ; ವಿಷ್ಣುವಿನ ನಿಯಮವನ್ನು ಪಾಲಿಸದೆ, ಕಾರ್ತಿಕವನ್ನು ನಿರ್ಲಕ್ಷಿಸಿದವನು—
ನ ಜನ್ಮಾರ್ಜಿತಪುಣ್ಯಸ್ಯ ಫಲಂ ಪ್ರಾಪ್ನೋತಿ ನಾರದ । ತಸ್ಮಾತ್ಸರ್ವಪ್ರಯತ್ನೇನ ದೇವದೇವಂ ಜನಾರ್ದನಮ್
ಅವನಿಗೆ ಜನ್ಮದಿಂದ ಸಂಪಾದಿಸಿದ ಪುಣ್ಯದ ಫಲವೂ ಸಿಗದು, ನಾರದ; ಆದ್ದರಿಂದ ಎಲ್ಲ ಪ್ರಯತ್ನದಿಂದ ದೇವದೇವರಾದ ಜನಾರ್ದನನನ್ನು ಸೇವಿಸಬೇಕು.