ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ । ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃಕ
ನನ್ನ ಅವ್ಯಕ್ತ ಸ್ವರೂಪದಿಂದ ಈ ಜಗತ್ತು ಎಲ್ಲೆಡೆ ಹರಡಿದೆ. ಎಲ್ಲ ಪ್ರಾಣಿಗಳು ನನ್ನಲ್ಲಿವೆ, ಆದರೆ ನಾನು ಅವರಲ್ಲಿಲ್ಲ.
ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ । ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ
ನೋಡು, ನನ್ನ ದೈವಿಕ ಯೋಗವನ್ನು! ಪ್ರಾಣಿಗಳನ್ನು ನಾನು ಉಳಿಸುತ್ತಿದ್ದರೂ, ಅವುಗಳು ನನ್ನಲ್ಲಿಲ್ಲ. ನಾನು ಅವರಲ್ಲಿಲ್ಲ, ಆದರೆ ನಾನು ಎಲ್ಲರ ಮೂಲ.
ಯಥಾಽಽಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ । ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಯ
ಹಾಗೆ, ದೊಡ್ಡ ಗಾಳಿ ಯಾವಾಗಲೂ ಆಕಾಶದಲ್ಲಿ ಇರುವಂತೆ, ಎಲ್ಲ ಪ್ರಾಣಿಗಳು ನನ್ನಲ್ಲಿವೆ ಎಂದು ನೀನು ತಿಳಿ.
ಸರ್ವಭೂತಾನಿ ಕೌನ್ತೇಯ ಪ್ರಕೃತಿಂ ಯಾನ್ತಿ ಮಾಮಿಕಾಮ್ । ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್
ಕೌಂತೇಯನೇ, ಕಾಲಚಕ್ರದ ಅಂತ್ಯದಲ್ಲಿ ಎಲ್ಲ ಪ್ರಾಣಿಗಳು ನನ್ನ ಸ್ವಭಾವದಲ್ಲಿ ಲೀನವಾಗುತ್ತವೆ; ಮತ್ತೆ ಕಾಲಚಕ್ರದ ಆರಂಭದಲ್ಲಿ ಅವುಗಳನ್ನು ನಾನು ಹೊರಹಾಕುತ್ತೇನೆ.
ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ । ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್
ನನ್ನ ಸ್ವಂತ ಸ್ವಭಾವವನ್ನು ಹಿಡಿದು, ನಾನು ಈ ಎಲ್ಲ ಪ್ರಾಣಿಗಳನ್ನು ಮತ್ತೆ ಮತ್ತೆ ಹೊರಹಾಕುತ್ತೇನೆ. ಅವುಗಳು ಸ್ವತಂತ್ರವಾಗಿರದೆ ಪ್ರಕೃತಿಯ ಆಧೀನದಲ್ಲಿವೆ.
ನ ಚ ಮಾಂ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ । ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು
ಧನಂಜಯನೇ, ಈ ಎಲ್ಲ ಕ್ರಿಯೆಗಳು ನನಗೆ ಬಂಧನವಾಗುವುದಿಲ್ಲ, ಏಕೆಂದರೆ ನಾನು ಅವುಗಳಲ್ಲಿ ಆಸಕ್ತಿಯಿಲ್ಲದೆ, ನಿರ್ಲಿಪ್ತನಾಗಿ ಇರುವೆನು.
ಮಯಾಽಽಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ । ಹೇತುನಾಽನೇನ ಕೌನ್ತೇಯ ಜಗದ್ವಿಪರಿವರ್ತತೇ
ನನ್ನ ಮೇಲ್ವಿಚಾರಣೆಯಲ್ಲಿ ಪ್ರಕೃತಿ ಚಲಿಸುವುದನ್ನೂ ಅಚಲವಾಗಿರುವುದನ್ನೂ ಸೃಷ್ಟಿಸುತ್ತದೆ. ಈ ಕಾರಣದಿಂದಲೇ, ಕೌಂತೇಯನೇ, ಜಗತ್ತು ಸದಾ ತಿರುಗುತ್ತಿರುತ್ತದೆ.
ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ । ಪರಂ ಭಾವಮಜಾನನ್ತೋ ಮಮ ಭೂತಮಹೇಶ್ವರಮ್
ಮೂಢರು ನನ್ನನ್ನು ಮಾನವನ ರೂಪದಲ್ಲಿ ಕಂಡು ತಿರಸ್ಕರಿಸುತ್ತಾರೆ. ಅವರು ನನ್ನ ಪರಮ ಸ್ವರೂಪವನ್ನೂ, ಪ್ರಾಣಿಗಳ ಮಹೇಶ್ವರನೂ ಎಂದು ಅರಿಯುವುದಿಲ್ಲ.
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ । ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ
ಅವರ ಆಶೆಗಳು ವ್ಯರ್ಥ, ಅವರ ಕೆಲಸಗಳು ಫಲವಿಲ್ಲದವು, ಅವರ ಜ್ಞಾನವೂ ವ್ಯರ್ಥ. ಮನಸ್ಸು ಗೊಂದಲಗೊಂಡವರು, ಮೋಹಗೊಳಿಸುವ ರಾಕ್ಷಸ ಮತ್ತು ಅಸುರ ಸ್ವಭಾವವನ್ನು ಸ್ವೀಕರಿಸಿದವರು ಇಂತವರು.
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ । ಭಜನ್ತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್
ಪಾರ್ಥನೇ, ಮಹಾತ್ಮರು ದೈವೀ ಸ್ವಭಾವವನ್ನು ಆಶ್ರಯಿಸಿ, ನನ್ನನ್ನು ಎಲ್ಲಿಂದಲೂ ಮನಸ್ಸು ಬೇರ್ಪಡಿಸದೆ ಭಜಿಸುತ್ತಾರೆ. ಅವರು ನನ್ನನ್ನು ಎಲ್ಲ ಜೀವಿಗಳ ಅವಿನಾಶಿಯಾದ ಮೂಲವೆಂದು ತಿಳಿದು, ಭಕ್ತಿಯಿಂದ ಪೂಜಿಸುತ್ತಾರೆ.
ಸತತಂ ಕೀರ್ತಯನ್ತೋ ಮಾಂ ಯತನ್ತಶ್ಚ ದೃಢವ್ರತಾಃ । ನಮಸ್ಯನ್ತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ
ಅವರು ಸದಾ ನನ್ನನ್ನು ಕೀರ್ತಿಸುತ್ತಾ, ದೃಢನಿಶ್ಚಯದಿಂದ ಪ್ರಯತ್ನಿಸುತ್ತಾ, ಭಕ್ತಿಯಿಂದ ನನ್ನಿಗೆ ನಮಸ್ಕರಿಸುತ್ತಾ, ಯಾವಾಗಲೂ ನನ್ನನ್ನು ಆರಾಧಿಸುತ್ತಾರೆ.
ಜ್ಞಾನಯಜ್ಞೇನ ಚಾಪ್ಯನ್ತೇ ಯಜನ್ತೋ ಮಾಮುಪಾಸತೇ। ಏಕತ್ವೇನ ಪೃಥಕ್ತ್ಕವೇನ ಬಹುಧಾ ವಿಶ್ವತೋಮುಮ್
ಇನ್ನೂ ಕೆಲವರು ಜ್ಞಾನಯಜ್ಞದ ಮೂಲಕ ನನ್ನನ್ನು ಪೂಜಿಸುತ್ತಾರೆ. ಕೆಲವರು ನನ್ನನ್ನು ಒಂದಾಗಿ, ಕೆಲವರು ಅನೇಕ ರೂಪಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಎಲ್ಲೆಲ್ಲೂ ಕಾಣುತ್ತಾ ಆರಾಧಿಸುತ್ತಾರೆ.
ಅಹಂ ಕ್ರತುರಹಂ ಯಜ್ಞಃ ಸ್ವಧಾಽಹಮಹಮೌಷಧಮ್। ಮನ್ತ್ರೋಽಹಮಹಮೇವಾಜ್ಯಮಹಮಗ್ನಿರಹಂ ಹುತಮ್
ನಾನೇ ಯಜ್ಞ, ನಾನೇ ಹೋಮ, ನಾನೇ ಪಿತೃಗಳಿಗೆ ಅರ್ಪಿಸುವ ಆಹಾರ, ನಾನೇ ಔಷಧಿ, ನಾನೇ ಮಂತ್ರ, ನಾನೇ ತುಪ್ಪ, ನಾನೇ ಅಗ್ನಿ, ನಾನೇ ಹೋಮದಲ್ಲಿ ಅರ್ಪಿಸುವ ದ್ರವ್ಯ.
ಪಿತಾಽಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ । ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ
ಈ ಜಗತ್ತಿಗೆ ನಾನೇ ತಂದೆ, ತಾಯಿ, ಪೋಷಕ, ತಾತ. ನಾನೇ ತಿಳಿಯಬೇಕಾದದ್ದು, ಪವಿತ್ರವಾದದ್ದು, ಓಂ ಎಂಬ ಶಬ್ದ, ಹಾಗೂ ಋಗ್ವೇದ, ಸಾಮವೇದ, ಯಜುರ್ವೇದ.
ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್। ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್
ನಾನೇ ಗಮ್ಯಸ್ಥಾನ, ನಾನೇ ಪೋಷಕ, ನಾನೇ ಒಡೆಯ, ಸಾಕ್ಷಿ, ನಿವಾಸ, ಆಶ್ರಯ, ಸ್ನೇಹಿತ. ನಾನೇ ಆದಿ, ಅಂತ್ಯ, ನೆಲೆ, ಧನಸಂಪತ್ತು, ಅವಿನಾಶಿಯಾದ ಬೀಜ.
ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ । ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ
ನಾನೇ ಬಿಸಿಲು ಕೊಡುತ್ತೇನೆ, ನಾನೇ ಮಳೆಯನ್ನೆತ್ತಿಕೊಳ್ಳುತ್ತೇನೆ, ಬಿಡುತ್ತೇನೆ. ನಾನೇ ಅಮೃತ, ನಾನೇ ಮರಣ, ನಾನೇ ಸತ್ತು ಇರುವದು, ನಾನೇ ಇಲ್ಲದಿರುವದು, ಅರ್ಜುನ.
ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾ ಯಜ್ಞೇರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯನ್ತೇ। ತೇ ಪುಣ್ಯಮಾಸಾದ್ಯ ಸುರೇನ್ದ್ರಲೋಕ- ಮಶ್ರನ್ತಿ ದಿವ್ಯಾನ್ದಿವಿ ದೇವಭೋಗಾನ್
ಮೂರು ವೇದಗಳನ್ನು ತಿಳಿದವರು, ಸೋಮಪಾನದಿಂದ ಪಾಪವಿಲ್ಲದವರು, ಯಜ್ಞಗಳಿಂದ ನನ್ನನ್ನು ಆರಾಧಿಸಿ ಸ್ವರ್ಗವನ್ನು ಬಯಸುತ್ತಾರೆ. ಅವರು ಪುಣ್ಯವನ್ನು ಪಡೆದು, ದೇವೇಂದ್ರನ ಲೋಕವನ್ನು ಸೇರಿ, ಆಕಾಶದಲ್ಲಿ ದೇವತೆಗಳ ದೈವಿಕ ಸುಖಗಳನ್ನು ಅನುಭವಿಸುತ್ತಾರೆ.
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೋ ಪುಣ್ಯೇ ಪರ್ತ್ಯಲೋಕಂ ವಿಶನ್ತಿ। ಏವಂ ತ್ರಯೀಧರ್ಮಮನುಪ್ರಪನ್ನಾ ಗತಾಗತಂ ಕಾಮಕಾಮಾ ಲಭನ್ತೇ
ಅವರು ಆ ವಿಶಾಲವಾದ ಸ್ವರ್ಗವನ್ನು ಅನುಭವಿಸಿದ ಮೇಲೆ, ಪುಣ್ಯ ಕ್ಷೀಣವಾದಾಗ ಮರಳಿ ಮನುಷ್ಯ ಲೋಕಕ್ಕೆ ಬರುತ್ತಾರೆ. ಹೀಗೆ ಮೂರು ವೇದಗಳ ಮಾರ್ಗವನ್ನು ಅನುಸರಿಸಿ, ಇಚ್ಛೆಗಳಿಗಾಗಿ ಬರುತ್ತಾ ಹೋಗುತ್ತಾ ಇರುತ್ತಾರೆ.
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ। ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್
ಆದರೆ ಯಾರು ನನ್ನನ್ನು ಮಾತ್ರ ಚಿಂತಿಸುತ್ತಾ, ಭಕ್ತಿಯಿಂದ ಪೂಜಿಸುತ್ತಾರೋ, ಅವರಿಗೆ ಯಾವಾಗಲೂ ಸ್ಥಿರ ಮನಸ್ಸು ಇರುವುದರಿಂದ, ನಾನು ಅವರ ಅಗತ್ಯವನ್ನೂ ಪೂರೈಸುತ್ತೇನೆ, ಅವರದ್ದನ್ನು ಕಾಯುತ್ತೇನೆ.
ಯೇಽಪ್ಯನ್ಯದೇವತಾಭಕ್ತಾ ಯಜನ್ತೇ ಶ್ರದ್ಧಯಾನ್ವಿತಾಃ। ತೇಽಪಿ ಮಾಮೇವ ಕೌನ್ತೇಯ ಯಜನ್ತ್ಯವಿಧಿಪೂರ್ವಕಮ್
ಹಾಗೆ, ಬೇರೆ ದೇವತೆಗಳನ್ನು ಭಕ್ತಿಯಿಂದ ಪೂಜಿಸುವವರು ಕೂಡ, ಕುಂತೀಪುತ್ರನೇ, ಅವರು ಕೂಡ ನನ್ನನ್ನೇ ಪೂಜಿಸುತ್ತಾರೆ, ಆದರೆ ಸರಿಯಾದ ವಿಧಾನದಿಂದ ಅಲ್ಲ.
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ। ನ ತು ಮಾಮಭಿಜಾನನ್ತಿ ತತ್ತ್ವೇನಾತಶ್ಚ್ಯವನ್ತಿ ತೇ
ನಾನೇ ಎಲ್ಲ ಯಜ್ಞಗಳ ಭೋಕ್ತಾ ಮತ್ತು ಒಡೆಯ. ಆದರೆ ಅವರು ನನನ್ನು ನಿಜವಾಗಿ ಅರಿಯುವುದಿಲ್ಲ, ಆದ್ದರಿಂದ ಅವರು ಕೆಳಗೆ ಬೀಳುತ್ತಾರೆ.
ಯಾನ್ತಿ ದೇವವ್ರತಾ ದೇವಾನ್ಪಿತೄನ್ಯಾನ್ತಿ ಪಿತೃವ್ರತಾಃ। ಭೂತಾನಿ ಯಾನ್ತಿ ಭೂತೇಜ್ಯಾ ಯಾನ್ತಿ ಮದ್ಯಾಜಿನೋಪಿ ಮಾಮ್
ದೇವತೆಗಳನ್ನು ಭಜಿಸುವವರು ದೇವತೆಗಳ ಬಳಿಗೆ ಹೋಗುತ್ತಾರೆ, ಪಿತೃಗಳನ್ನು ಪೂಜಿಸುವವರು ಪಿತೃಗಳ ಬಳಿಗೆ ಹೋಗುತ್ತಾರೆ, ಭೂತಗಳನ್ನು ಆರಾಧಿಸುವವರು ಭೂತಗಳ ಬಳಿಗೆ ಹೋಗುತ್ತಾರೆ, ನನ್ನನ್ನು ಪೂಜಿಸುವವರು ನನ್ನ ಬಳಿಗೆ ಬರುತ್ತಾರೆ.
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ। ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ
ಯಾರು ಭಕ್ತಿಯಿಂದ ಎಲೆ, ಹೂವು, ಹಣ್ಣು, ನೀರನ್ನು ನನಗೆ ಅರ್ಪಿಸಬಹುದೋ, ನಾನು ಶುದ್ಧ ಹೃದಯದಿಂದ ಅರ್ಪಿಸಿದ ಆ ಭಕ್ತಿಯನ್ನೇ ಸ್ವೀಕರಿಸುತ್ತೇನೆ.
ಯತ್ಕರೋಷಿ ಯದಶ್ರಾಸಿ ಯಜ್ಜುಹೋಷಿ ದದಾಸಿ ಯತ್। ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್
ನೀನು ಏನು ಮಾಡಲಿ, ಏನು ತಿನಲಿ, ಏನು ಹೋಮ ಮಾಡಲಿ, ಏನು ಕೊಡು, ಏನು ತಪಸ್ಸು ಮಾಡಲಿ, ಕುಂತೀಪುತ್ರನೇ, ಅವನ್ನೆಲ್ಲಾ ನನಗೆ ಅರ್ಪಣೆಯೆಂದು ಮಾಡು.
ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬನ್ಧನೈಃ । ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ
ಹೀಗೆ ನೀನು ಶುಭ-ಅಶುಭ ಫಲಗಳಿಂದ ಕೂಡಿದ ಕರ್ಮಬಂಧನಗಳಿಂದ ಮುಕ್ತನಾಗುತ್ತೀ. ಮನಸ್ಸು ತ್ಯಾಗಯೋಗದಲ್ಲಿ ಏಕಾಗ್ರವಾದಾಗ, ಮುಕ್ತನಾಗಿ ನನ್ನ ಬಳಿಗೆ ಬರುತ್ತೀಯೆ.
ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ । ಯೇ ಭಜನ್ತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್
ನಾನು ಎಲ್ಲ ಜೀವಿಗಳಿಗೂ ಸಮಾನ. ನನಗೆ ಯಾರೂ ಶತ್ರುವೂ ಇಲ್ಲ, ಯಾರೂ ಪ್ರಿಯರೂ ಇಲ್ಲ. ಆದರೆ ಭಕ್ತಿಯಿಂದ ನನ್ನನ್ನು ಭಜಿಸುವವರು ನನ್ನಲ್ಲಿದ್ದಾರೆ, ನಾನೂ ಅವರಲ್ಲಿದ್ದೇನೆ.
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್। ಸಾಧುರೇವ ಸ ಮನ್ತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ
ಯಾರಾದರೂ ಬಹಳ ಕೆಟ್ಟ ನಡೆ ಹೊಂದಿದ್ದರೂ ಸಹ, ಅವನು ನನ್ನನ್ನು ಏಕಾಗ್ರ ಭಕ್ತಿಯಿಂದ ಆರಾಧಿಸಿದರೆ, ಅವನನ್ನು ಸದಾಚಾರಿ ಎಂದು ಪರಿಗಣಿಸಬೇಕು. ಏಕೆಂದರೆ ಅವನು ನಿಜವಾದ ನಿರ್ಧಾರ ಮಾಡಿಕೊಂಡವನು.
ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿಂ ನಿಗಚ್ಛತಿ। ಕೌನ್ತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ
ಅವನು ಬೇಗನೇ ಧರ್ಮಮಾರ್ಗದಲ್ಲಿ ಸ್ಥಿರನಾಗಿ, ಶಾಶ್ವತವಾದ ಶಾಂತಿಯನ್ನೂ ಪಡೆಯುತ್ತಾನೆ. ಕುಂತೀಪುತ್ರನೇ, ನನ್ನ ಭಕ್ತನು ಎಂದಿಗೂ ನಾಶವಾಗುವುದಿಲ್ಲ ಎಂದು ನೀನು ಖಚಿತವಾಗಿ ತಿಳಿದುಕೋ.
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪಯೋನಯಃ । ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಽಪಿ ಯಾನ್ತಿ ಪರಾಂ ಗತಿಂ
ಪಾರ್ಥನೇ, ಪಾಪಮೂಲದಿಂದ ಹುಟ್ಟಿದವರಾದರೂ, ಮಹಿಳೆಯರು, ವ್ಯಾಪಾರಿಗಳು, ಶೂದ್ರರು—ಇವರು ನನ್ನನ್ನು ಆಶ್ರಯಿಸಿದರೆ, ಅವರೂ ಕೂಡ ಪರಮ ಗತಿಯನ್ನೇ ಪಡೆಯುತ್ತಾರೆ.
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ । ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್
ಹೀಗಿರುವಾಗ, ಪುಣ್ಯಶೀಲ ಬ್ರಾಹ್ಮಣರು ಮತ್ತು ಭಕ್ತ ರಾಜರ್ಷಿಗಳು ಇನ್ನಷ್ಟು ಸುಲಭವಾಗಿ ಪರಮ ಗತಿಯನ್ನನ್ನು ಪಡೆಯುತ್ತಾರೆ. ಈ ನಶ್ವರ ಮತ್ತು ದುಃಖಪೂರ್ಣ ಲೋಕವನ್ನು ಪಡೆದಿರುವ ನೀನು ನನ್ನನ್ನು ಭಜಿಸು.